ಕಲಿಕೆಯ ಕಮ್ಮಟಗಳು
ಕನ್ನಡ ಮಾಧ್ಯಮ ಶಾಲೆಗಳ ಮಕ್ಕಳಿಗಾಗಿ ವಿಜ್ಞಾನ ಕಮ್ಮಟಗಳನ್ನು ಈ ಯೋಜನೆಡಯಲ್ಲಿ ನಡೆಸಲಾಗುತ್ತಿದೆ. ಮುನ್ನೋಟ ಟ್ರಸ್ಟ್ ತಂಡ ಶಾಲೆಗಳಿಗೆ ಭೇಟಿಕೊಟ್ಟು ಅಲ್ಲಿನ ಮಕ್ಕಳು ಮತ್ತು ಶಿಕ್ಷಕರೊಂದಿಗೆ ನಡೆಸುವ ಕಾರ್ಯಕ್ರಮವಿದು. ಪುಸ್ತಕದಾಚೆಗೆ ಆಟ-ಮಾತುಕತೆಯ ಮೂಲಕ ವಿಜ್ಞಾನದ ಬಗ್ಗೆ ಕುತೂಹಲ ಮೂಡಿಸುವ ಪ್ರಯತ್ನವಿದು.
ಇಂಡಿಯನ್ ಆಕಾಡಮಿ ಆಫ್ ಸೈನ್ಸ್ ನಂತಹ ಮೇರುಮಟ್ಟದ ಸಂಸ್ಥೆಗಳೊಂದಿಗೆ ಒಡಗೂಡಿ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಗೆ “ಅರಿವಿನ ಅಂಗಳ” ಎಂಬ ವಿಜ್ಞಾನ ಕಮ್ಮಟವನ್ನು ಮುನ್ನೋಟ ಟ್ರಸ್ಟ್ ನಡೆಸುತ್ತಿದೆ. ಈ ಯೋಜನೆಯ ಮೊದಲ ಕಾರ್ಯಕ್ರಮದ ಚಿತ್ರ ಇಲ್ಲಿದೆ. ಸುಮಾರು 10 ಕನ್ನಡ ಮಾಧ್ಯಮ ಶಾಲೆಗಳಿಂದ ಸುಮಾರು 40 ಶಾಲಾ ಮಕ್ಕಳು ಮತ್ತು ಶಿಕ್ಷಕರು ಇದರಲ್ಲಿ ಪಾಲ್ಗೊಂಡಿದ್ದರು.